ಸುಮಾರು ಒಂದು ತಿಂಗಳಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು ಮಾಡುವಪ್ರಯತ್ನಗಳಉ ತುಂಬಾ ಅಪಾಯಕಾರಿ ಮತ್ತು, ಅಸಹ್ಯಕರ. ಹಾಗೆಂದಮಾತ್ರಕ್ಕೆ, ಕೇವಲ ವರುಣ್ ಗಾಂಧಿಯೊಬ್ಬನೇ ಈ ರೀತಿಯ ರಾಜಕೀಯ ನಡೆಸುತ್ತಿದ್ದಾನೆಯೇ? ಬಿಹಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತುಂಬಾ ಹತ್ತಿರದಿಂದ ನೋಡಿದಾಗ, ಭಯವುಂಟಾಗುತ್ತದ.
ಲಾಲೂ ಪ್ರಸಾದರ ಹೇಳಿಕೆಯನ್ನು ನಾವು ಗಮನಿಸಿ -”ನಮ್ಮ ದೇಶದಲ್ಲಿ ಬ್ರಾಹ್ಮಣರನ್ನು ದೇವರೆಂದು ಪರಿಗಣಿಸುತ್ತೇವೆ. ಅವರ ಆಶೀರ್ವಾದವಿಲ್ಲದೇ, ಯಾರೊಬ್ಬರೂ ರಾಜರಾಗಲೂ [...]